"ಕೊಪ್ಪರಿಗೆಯ ಬೆಲ್ಲ" - ಪ್ರಾಸ್ತವಿಕೆ
ಕೊಪ್ಪರಿಗೆಯ ಬೆಲ್ಲ “ ಸಂಪದವೆನಿಸಿತು ಬಣ್ಣಿಸಲಳವು ಕವನದಲಿ ? ಬೆಳಗಿನಲಿ ಬೈಗಿನಲಿ ಮಾಗಿಯಲಿ ಚೈತ್ರದಲಿ ಮಳೆಯಲಿ ಮಂಜಿನಲಿ ಹಗಲಿನಲಿ ರಾತ್ರಿಯಲಿ ದೃಶ್ಯವೈವಿದ್ಯಮಂಮ್ ರಚಿಸಿ ನೀಂ ಭುವನದಲಿ ಸ್ವರ್ಗವಾಗಿಹೆ ನನಗೆ! ” - ಕುವೆಂಪು ಪ್ರಾಸ್ತವಿಕೆ ಕವಿ ಶೈಲದಲಿ ಪುಟ್ಟಪ್ಪನಿಗೆ ಕಂಡ ಸ್ವರ್ಗ ನನಗೆ ನನ್ನ ಸಮಗೋಡಿನಲ್ಲಿ ಕಾಣುತ್ತದೆ. ಕೊಡಚಾದ್ರಿಯ ತಪ್ಪಲಲಿ , ಶರಾವತಿಯ ಸೆರೆಗಿನಲಿ , ತೆಂಗುಗಳ ನೆರಳಿನಲಿ ಬಚ್ಚಿಕೊಂಡು , ಅಕೇಶಿಯಾ ಗಾಳಿಯ ಸದ್ದಿನ ಮೂಲಕ ತನ್ನ ಇರುವಿಕೆಯನ್ನು ಉಸುರುತ್ತಿರುವ , ಚಿತ್ತಾಕರ್ಷಕವಾದ ಪಕ್ಷಿಗಳು , ಕೀಟಗಳಿಗೆ ಆಸರೆಯಾಗಿರುವ ತವರು ಆ ನನ್ನ ಮಲೆನಾಡು. ಅಲ್ಲಿ ಹೋಗುವ ಯೋಚನೆಯಿಂದಲೇ ನನ್ನ ತನುಮನ ಅರಳುತ್ತದೆ. ಊಸರವಳ್ಳಿಯು ತನ್ನ ಬಣ್ಣ ಬದಲಿಸುವ ರೀತಿ ಮಲೆನಾಡು ; ಮಾಗಿಯಲಿ ಕೊರೆಯುವಚಳಿಯು , ವಸಂತದಲಿ ಚಿಗುರು , ಬೇಸಿಗೆಯಲ್ಲಿ ಹಲಸಿನ ಹಪ್ಪಳ ಒಣಗುವಷ್ಟು ಬಿಸಿಲು ಮ...
Comments
Post a Comment