Posts

Showing posts from June, 2020

"ಕೊಪ್ಪರಿಗೆಯ ಬೆಲ್ಲ" (7) - ಹೌದು ಹುಲಿಯ!

Image
ಹೌದು ಹುಲಿಯಾ!       ಮಾರನೆಯ ದಿವಸ ಮಧ್ಯಾಹ್ನ ಊಟದ ಸಮಯ ... ಎರಡು ತುತ್ತು ಹೆಚ್ಚಿಗೆ ತಿಂದು ಎದ್ದಿದ್ದೆ. ನಾನು ನನ್ನ ತಂಗಿ ಸುಬ್ಬುವಿನ ಬರುವಿಕೆಯನ್ನೇ ನೀರೀಕ್ಷಿಸುತ್ತಾ ಪಾಗಾರದ ಮೇಲೆ ಕೂತಿದ್ದೆವು. ಮೂಲೆಯಲ್ಲಿ ಲಪ್ಪಿ ಎಲೆ ಅಡಿಕೆ ಜಗಿಯುತ್ತಾ ವಿಶ್ರಾಂತಿ ಪಡೆಯುತ್ತಿದ್ದಳು. ಎಂದಿನಂತೆ ನಾನು ಅವಳ ಬಳಿ ಕೂತು ಹರಟೆ ಹೊಡಿಯಲು ಸಮಯವಿರಲಿಲ್ಲ ಹಾಗು ಸಂಯಮವೂ ಇರಲಿಲ್ಲ. ಅಷ್ಟರಲ್ಲಿ ಹರಿ ಹರಿ ಎಂದು ಸುಬ್ಬು ಪ್ರತ್ಯಕ್ಷವಾದನು. ನಾವು ಸುಬ್ಬುವಿನ ಜೊತೆ, ನೇರಳೆ ಮನೆ ಬ್ಯಾಣದ ಮೇಲಿರುವ ಬಾಳೆ ಗುಡ್ಡಕ್ಕೆ ಹೋಗಿ ಸೂರ್ಯಾಸ್ತ ನೋಡಿ ಬರುತ್ತೇವೆ ಎಂದು ಹೇಳಿ ಹಿಂದಿನ ದಿವಸ  ತಾಯಿಯಿಂದ  ಒಪ್ಪಿಗೆ ಪಡೆದಿದ್ದೆವು. ನಾವು ಊನ್ಗೋಲು ತಳ್ಳಿ ಹೋಗುವುದನ್ನೇ ನೋಡುತ್ತಾ ನಿಂತ ಲಪ್ಪಿ ಗಟ್ಟಿಯಾಗಿ, "ಹಾಗೆ ಊನ್ಗೋಲು ಸರ್ಸಿ ಹೊಯ್ನಿ ಜಾನ್ವಾರ್ ನುಗ್ತಾವ್ ಕಡಿಗೆ" ಎಂದಳು.       ಗೋದಿ ಬಣ್ಣ ಕೋಲು ಮೈ ೪೫  ಅಂಗುಲ, ಎಣ್ಣೆಗೆಂಪು ಬಣ್ಣ ಸಾಧಾರಣ ಮೈಕಟ್ಟು ೬೦ ಅಂಗುಲ, ಶ್ವೇತವರ್ಣ ಸಾದಾರಣ ಮೈಕಟ್ಟು ೫೪ ಅಂಗುಲ, ಪ್ರತಿಯೊಬ್ಬರ ಕೈಯಲ್ಲಿ ಅವರಷ್ಟೇ ಎತ್ತರದ ಒಣ ಕೋಲಿನ ಆಯುಧ ಕಾಲಿನಲ್ಲಿ ಹವಾಯ್ ಚಪ್ಪಲಿ, ಅದರಲ್ಲೊಂದು ಈಗಲೋ ಆಗಲೋ ಜೀವಬಿಡುವಂತಿತ್ತು, ದೊಗಲೆ ಶರ್ಟು ಅಲ್ಲಲ್ಲಿ ಗಾಳಿಯಾಡಲು ಸಣ್ಣ ತೂತು, ಮೊಣಕಾಲು ಉದ್ದ ದೊಗಲೆ ಚಡ್ಡಿ, ಬಾಯಿ ಖರ್ಚಿಗೆ ಜೇಬಿನಲ್ಲಿ ಸುಟ್ಟ ಗೀರು ಬೀಜ, ತಲೆಗೆ ಕ್ಯಾಪ್, ತೊಟ್ಟ ಬಟ್ಟೆ ನೋಡಿ ಗಂಡೋ! ಹೆಣ್ಣೋ! ಹೇ

"ಕೊಪ್ಪರಿಗೆಯ ಬೆಲ್ಲ" (6) - ಇಂಗಾಲದ - ಡೈ- ಆಕ್ಸೈಡ್ ಗೆ ಬೈ ಬೈ!

Image
ಇಂಗಾಲದ ಡೈ ಆಕ್ಸೈಡ್ ಗೆ ಬೈ ಬೈ!     ಪ್ರಯಾಣದ ಸುಸ್ತಿಗೋ ಬಿಸಿಲಿನ ಬೇಗೆಗೋ ಹತ್ತಿದ ನಿದ್ದೆಯಿಂದ ಎಚ್ಚರವಾದಾಗ ಸಮಯ ೫ ಘಂಟೆ! ಆಗ ತಾನೇ ಕರೆದ ನೊರೆಯುಕ್ತ ಹಸುವಿನ ಹಾಲು ಹಾಗು ಸಮಯಕ್ಕೆ ಮೊದಲೇ ಫಲಪಕ್ವಾವಾದ ಹಲಸಿನ ತೊಳೆಯ ಅಪೋಶನವಾಯಿತು. ಇನ್ನು ಏನು ಬೇಕು ಈ ಜೀವಕ್ಕೆ? ಸುಂದರವಾದ ಪ್ರಕೃತಿ ಇಲ್ಲಿ ಯಾರೂ ಪ್ರಮುಖರಲ್ಲ. ಇದುವೇ ಮನುಷ್ಯರ, ಪ್ರಾಣಿ-ಪಕ್ಷಿಗಳ ಮತ್ತು ಕೀಟಗಳ ಅವಿಭಕ್ತ ಕುಟುಂಬ. ವಿಧವಿಧವಾದ ಹೂ ಬಳ್ಳಿಗಳ, ಹಣ್ಣು ಕಾಯಿಗಳ ಇರುವಳಿ ಪ್ರಕೃತಿ ಮಾತೆಯ ಬಳುವಳಿ.      ಮಳ್ಳಿ ಮಳ್ಳಿ ಮಿಂಚುಳ್ಳಿಯ ಸಂಭಾಷಣೆ, ಜಾಣ ಜಾಣ ಕಾಜಾಣಗಳ ಸೊಕ್ಕಿನ ಹಾರಾಟ, ಕೆಂಪು ಮೀಸೆ ಪಿಕಳಾರಗಳ ಪಿಸುಮಾತು ಕೇಳುತ್ತಿರಲು ಪೂರ್ಣ ಚಂದ್ರ ತೇಜಸ್ವಿಯವರ "ಪರಿಸರದ ಕಥೆ" ಪುಸ್ತಕ ಮನಸ್ಸಿನಲ್ಲಿ ಸುಳಿದು ಹೋಯಿತು.     ಪಾಗಾರದ ಮೇಲೆ ಕೂತು ನಮ್ಮ ಪಂಚಾಯ್ತ್ಗೆ ಶುರುವಾಯಿತು. ಅವರ ಇವರ ಮನೆ ಕಥೆಗಳು, ಯಾರು ಹುಟ್ಟಿದರು, ಯಾರು ಸತ್ತರು, ಯಾರು ಬಿದ್ದರು, ಯಾರು ನೆಟ್ಟರು ಹೀಗೆ ಹತ್ತು ಹಲವು ಊರಿನ ವಿಷಯಗಳು ತೇಲಿ ಬರಲು ಅದೆಲ್ಲವೂ ನನ್ನ ಗಣನೆಗೆ ಮೀರಿದ್ದವು. ಗೋಧೂಳಿ ಸಮಯ, ಇತ್ತ ಲಪ್ಪಿ ತನ್ನ ಕೆಲಸಗಳನ್ನು ಮುಗಿಸಿ ಒಂದು ಪುಟ್ಟ ಔಷಧಿ ಬಾಟಲ್ ನಲ್ಲಿ ಆ ರಾತ್ರಿ ತನಗೆ ಕುಡಿಯಲು ಬೇಕಾದ ಹಾಲು ತೆಗುದುಕೊಂಡು ಮುಳುಗಡೆ ಸಮೀಪವಿರುವ ತನ್ನ ಮನೆಯತ್ತ ಹೆಜ್ಜೆ ಹಾಕಲು ಹಿಂದಿನಿಂದ "ನಾನು ಬರ್ತೀನಿ ನಿಮ್ ಮನೆಗ್ ಕರ್ಕೊಂಡ್ ಹೋಗೆ" ಎಂದೆ. ಹೀಗ

" JANAKA " : From the bottom of his daughter's heart :)

Image
      Reprising a thank you note!       Certain emotional connections are paramount for one's sustainability in life and its really one's destiny to perceive and rejoice these connections time to time. Some bonding will come to us by birth and some we seek from the outside world. A  "father - daughter" connection is one such feeling which most of us enjoy by birth itself.        When we look at the life of a new born! we can only think of it's helplessness, dependence and it will always tries to make sense of the world. Life revolves around it's primary caretakers. It can be mother or father or both. But as we grow, we see things getting unfold and there will be something flashy in the outside world which attracts and grabs our attention. May be that's what we call as exposure?! don't you think these exposures in a way provoke us to set some unrealistic expectations from relationships.       When I was a child I enjoyed all the attention and love that

"JANAKA" : Father's day special

Image
"JANAKA" from a daughter who is four less than half the age of her Janaka :)        Every day when I wake up in the morning my hand involuntarily extends to grab my mobile phone. My first invest of energy is to bring back my relaxed or dilated pupil forcibly to do its job! for me, gone those days when I used to see my palm and murmur,  Karaagre Vasate Lakshmi Karamadhye Sarasvati | Karamuule Sthite Gowri Prabhaate Karadarshanam ||       As usual this morning when I opened my whatsApp, the status section was flooded with posts from all those early risers! when I address them as early risers it doesn't mean that I brake my sleep at noon or something... I manage to get myself completely up at around 8 a.m. somehow! Well, due to the recent tensions and series of bad news coming in from all around the world, for a second I thought now what? then after checking on them made me realize today is the day with multiple significance and the most important being FATHER'S DAY...  

"ಕೊಪ್ಪರಿಗೆಯ ಬೆಲ್ಲ" (4) - ಬಳುಕುವ ದಾರಿ ಭೂತನೊಣಿ ಏರಿ!

Image
         ಬಳುಕುವ ದಾರಿ ಭೂತನೊಣಿ ಏರಿ!    ಹೊಸನಗರದಿಂದ ಮುಂದೆ ಸಾಗುವ ರಸ್ತೆಯು ಅಂಕು ಡೊಂಕಾಗಿ ಬಳುಕುವ ಬಳ್ಳಿಯಂತೆ ಬೆಂಡಾಗಿದೆ. ದಟ್ಟ ಕಾನನದ ಮಧ್ಯೆ ದೂರದಲ್ಲಿ ಕಾಣುವ ಧೈತ್ಯಾಕಾರದ ಬೆಟ್ಟಗಳು, ಅದರ ಮಧ್ಯೆ ಕಾಳಿಂಗ ಸರ್ಪ ನಡೆದಂತಿರುವ ಟಾರ್ ರಸ್ತೆ ಅದರ ಮೇಲೆ ಬಸ್ಸು. ಇಳಿಜಾರಿನಲ್ಲಿ ಹರಿಯುವ ನೀರಿನಷ್ಟೇ ಸರಾಗವಾಗಿ ಚಲಿಸಿ, ಕಡಿದಾದ ಏರಿನಲ್ಲಿ ಒಂದಿಂಚೂ ದಾಟಲು ಕಷ್ಟ ಪಡುತ್ತಿದ್ದ ಬಸ್ಸಿನ ಹಾಗೂ ಒಳಗಿನ ಪ್ರಯಾಣಿಕರ ಪರಿಸ್ಥಿತಿ ಹೇಳತೀರದು. ಹಾಗೆಯೇ ಹೊಟ್ಟೆ ತೊಳಸುವುದು ಅಸಹಜವೇನಲ್ಲ ಬಿಡಿ!      ಮೂರು ತಾಸು ಬಸ್ಸಿನಲ್ಲಿ ಕೂತು ಬೋರ್ ಆದ ನಮಗೆ ‘ಭೂತನೋಣಿಯ ಏರು ಕಂಡಿದ್ದೇ, ಆದ ಆಯಾಸವೆಲ್ಲ ಮರೆಯುವಂತಾಗಿ ಇಳಿಯಲು ಸಜ್ಜಾಗಿ ಕೂತೆವು’.     ಈ ಜಾಗಕ್ಕೆ ಭೂತನೋಣಿ ಎಂದು ಏಕೆ ಕರೆಯುತ್ತಾರೆ? ಎಂದು ಹಿಂದೊಮ್ಮೆ ನನ್ನ ಮಾವನ್ನನ್ನು ಕೇಳಿದ್ದೆ, ಅವರು ಹೇಳಿದ ಕಥೆಯನ್ನು ನೆನೆಸಿಕೊಂಡರೆ,  ಅಯ್ಯೋ ! ನಮ್ಮ ಬಸ್ಸು ಈ ಜಾಗವನ್ನು ದಾಟಿದರೆ ಸಾಕಪ್ಪಾ ಎಂದೆನಿಸುತ್ತದೆ. ಈ ಭೂತನೋಣಿಯ ಏರು ಎಷ್ಟು ಕಡಿದಾಗಿತ್ತೆಂದರೆ ಸಮಾಗೋಡಿನ "ನಲ್ಲಿ ಗುಡ್ಡದ" ಮೇಲೆ ಕೂತರೆ ಈ ಏರಿನಿಂದ ಇಳಿಯುವ ಬಸ್ಸಿನ ಹೆಡ್ಲೈಟ್ ತೋರುತ್ತಿತ್ತು. ಇಂತಹ ಏರಿನಲ್ಲಿ ಬಸ್ಸು ಓಡಿಸುವುದು ಚಾಲಕನ ಚಾಲನೆಯ ಪರೀಕ್ಷೆಯೆಂದೇ ಹೇಳಬಹುದು. ಹಿಂದೊಮ್ಮೆ ಸೈಜ್ಗಲ್ಲು ಹೊತ್ತ ಲಾರಿಯು ಇಲ್ಲಿನ ಏರು ರಸ್ತೆಯನ್ನು ಹತ್ತುವಾಗ ಹಿಂಬದಿ ಇಂದ ಯಾರೋ ಆ  ಲಾರಿಯನ್ನು ಹಿಡಿದು ಎಳೆದ

"ಕೊಪ್ಪರಿಗೆಯ ಬೆಲ್ಲ" (5) - ಇಂತಿ ನನ್ನ ಪ್ರೀತಿಯ ಲಪ್ಪಿ...!

Image
ಇಂತಿ ನನ್ನ ಪ್ರೀತಿಯ ಲಪ್ಪಿ...!    ಅಂತೂ   ನಮ್ಮ ಬಸ್ಸು ಭುಸುಗುಡುತ್ತಾ ಭೂತನೊಣಿ ಏರು ಹತ್ತಿ ಇಳಿಯಲು ನಾವು ನಮ್ಮ ಲಗ್ಗೇಜ್‌ಗಳನ್ನು ಹಿಡಿದು ಬಾಗಿಲ ಬಳಿ ಬಂದು ನಿಂತೆವು. ‘ಯರ‍್ರೀ ಸಮ್ಗೊಡ್ ‘ ಎಂಬ ಕಂಡಕ್ಟರ್ ಕರೆಗೆ ಬಸ್ಸು ನಿಲ್ಲಲು, ನಾವು  ಅಬ್ಬಾ! ಅಂತೂ ಊರು ಸೇರಿದೆವು ಎಂಬ ನಿಟ್ಟುಸಿರಿನಿಂದ ಬಸ್ಸು ಇಳಿದೆವು.   ಸುತ್ತ ಕಣ್ಣು  ಹಾಯಿಸಿದಷ್ಟೂ ಹಸಿರು, ದಿಗಂತ ಮುಟ್ಟುವ ತೆಂಗು, ನೀರೆಯರ ಸೆರಗಿನಂತೆ ನಳನಳಿಸುತ್ತಿರುವ ಪೈರು. ಬೀಸುವ ತಂಗಾಳಿಗೆ ಮೈ ಒಡ್ಡಿದಾಗ ಸಿಗುವ ಆಹ್ಲಾದತೆ ಭೂಸ್ವರ್ಗಕ್ಕೆ ಕಾಲಿಟ್ಟಿರುವುದ ಪ್ರಮಾಣಿಸುತ್ತಿತ್ತು.     ಬಸ್ಸಿನ ಬುಡಕ್ಕೆ ನಮ್ಮನ್ನು ಕರೆದೊಯ್ಯಲು ಬಂದಿದ್ದ ‘ಲಪ್ಪಿ’ ನನ್ನ  ನೋಡಿದೊಡನೆ , "ಬಂದ್ರಾ ಪುಟ್ಟಮ್ಮ ಆರಾಮಾ?" ಎಂದು ಎಲೆ ಅಡಿಕೆ ತುಂಬಿದ ಬಾಯಲ್ಲಿ ನಮ್ಮನ್ನು ಸ್ವಾಗತಿಸುತ್ತಾ ನಮ್ಮ ಕೈಯಿಂದ ಲಗ್ಗೇಜ್‌ಗಳನ್ನು ತೆಗೆದುಕೊಂಡು, ತಲೆಮೇಲೋಂದು  ಸೊಂಟದ   ಮೇಲೊಂದು ಚಚ್ಚಿ ಮುನ್ನೆಡೆದಳು. ಆಕೆಯನ್ನು ಹಿಂಬಾಳಿಸುತ್ತಾ ನಾವುಗಳು ಹೆಜ್ಜೆ ಹಾಕಿದೆವು. "ಕಾಲಬದಿ ಜೋಪಾನ, ಮೆಲ್ಲ ಹೆಜ್ಜೆ ಹಾಕಿ" ಎಂದು ಆಗ್ಗಾಗ್ಗೆ ಬರುತ್ತಿದ್ದ ಆಕೆಯ  ಎಚ್ಚರಿಕೆ   ಮಾತುಗಳನ್ನು ನಾವು ಬಹಳ  ಗಂಭೀರವಾಗಿ   ಪರಿಗಣಿಸಲು, ಆಕೆ ಸಾರ ದಾಟಿ ತೋಟ ಸೇರಿದರೆ, ನಾವು ಆಗತಾನೆ ಕೊನೆಯ ಗದ್ದೆಗೆ ಬಂದಿಳಿದು ಸಾರದ ಕಡೆ ಮುಖ ಮಾಡಿದ್ದೆವು.    ಲಕ್ಷ್ಮಿ: ನಾನು ಹುಟ್ಟಿದ ಸಮಯದಲ್ಲಿ ನನ್ನ  ಅಜ್ಜನ 

All about books!

Image
RICHNESS OF KANNADA POETS... The poet of 20th century with an ideology of SARVODAYA, it's none other than our beloved PUTTAPPA :) His books are the sole evidence for his acknowledging nature and great interest in all the greatest literatures of the world. The emerging, industrialization, Colonialism, British administration,   Christian missionaries during his period inspired him to give a new dimension to his literary works!  He was a true devotee of nature. We all enjoy nature but at times we lack proper words to express our joy and the beauty that we see but PUTTAPPA aka KUVEMPU was never short of words. With him he had  treasury of words and used it very smartly, boldly and effectively without any hesitation.  The book which I'm holding on to now is KANURU HEGGADATI, 18th edition as mentioned in it's colophon. Novel encloses of 81 chapters and comes with a beautiful panel showing RACKET-TAILED DRONGO(kajana in kannada) which is also known as KOTHWAL (hindi word which mea

"ಕೊಪ್ಪರಿಗೆಯ ಬೆಲ್ಲ" (3) - ಭಟ್ಟರಗಾಡಿ ಎಕ್ಸ್ಪ್ರೆಸ್!

Image
ಭಟ್ಟರಗಾಡಿ ಎಕ್ಸ್ಪ್ರೆಸ್!       ಊರಿಗೆ ಹೊರಡುವ ದಿನ ಬಂದೇ ಬಿಟ್ಟಿತು. ಬಸ್ಸಿನ ಸೌಕರ್ಯ ಸ್ವಲ್ಪ ಕಡಿಮೆ ಇದ್ದುದ್ದರಿಂದ ಮುಂಜಾನೆ ೬:೩೦ ರ ಮೊದಲ ಬಸ್ಸಿಗೆ ಹೊರಡುವುದು ಒಳಿತೆಂದು ಭಟ್ಟರಗಾಡಿ ಹೆಚ್.ಟಿ.ಕೊ. ಲಿಮಿಟೆಡ್‌ಗಾಗಿ ಬಸ್ ನಿಲ್ಡಾಣದಲ್ಲಿ ಕಾದು ನಿಂತೆವು. ಈ ಗಾಡಿಯ ವಿಶೇಷವೆಂದರೆ ಇದು “ ನಾನ್ ಸ್ಟಾಪ್ ಎಕ್ಸ್ಪ್ರೆಸ್ ” ಅಂತ ಬರೆದರೂ “ ನಾನಾ ಸ್ಟಾಪಿನ ” ಗಾಡಿ. ಕೈ ಮಾಡಿದವರು , ದುರುಗುಟ್ಟಿ ನೋಡಿದವರು ಎಲ್ಲರ ಮುಂದೆಯೂ ಬಸ್ಸನ್ನು ನಿಲ್ಲಿಸುವ ಭಟ್ಟರು ಹಲ್ಲುಕಿರಿಯುತ್ತಾ ಹೊಯ್! ಎಲ್ಲಿಗೆ ? ಎಂದು ಕೇಳಿ ಕಂಡಕ್ಟರ್ ಮಾಡುವ ಕೆಲಸವನ್ನು ತಾವೇ ಮಾಡುತ್ತಿದ್ದರು. ಇದು ಖಾಲಿ ಜನರನ್ನು ಕೊಂಡೊಯ್ಯುವ ಗಾಡಿ ಆಗದೆ , ಹಾಲು , ಹೂವು , ಹಣ್ಣು , ಹೊಗೆಸೊಪ್ಪು , ಪೇಪರ್ ಎಲ್ಲಾ ತರಹದ ಪಾರ್ಸಲ್ ಸಾಗಿಸುವ ವಾಹನವೂ ಆಗಿತ್ತು. ಆ ಬಸ್ಸಿನ ಡ್ರೈವರ್ ಹಾಗೂ ಕಂಡಕ್ಟರ್‌ನ ಜೋಡಿ ಒಳ್ಳೆ ಕಿಲಾಡಿ ಜೋಡಿ. ದೂರದ ಆಯಾಸದ ಪ್ರಯಾಣವನ್ನು ಆನಂದಮಯವಾಗಿ ಮಾಡುವ ಅವರ ವಾಕ್‌ಚಾತುರ್ಯ , ತಮಾಷೆ , ಹಾವಭಾವ ಶ್ಲಾಘನೀಯ. ಶಾಲೆ ಮಕ್ಕಳನ್ನು ಮುಂದಕ್ಕೆ ಹತ್ತಿಸಿಕೊಂಡು ಅವರನ್ನು ರೇಗಿಸುವುದು , ಹುಡುಗರಿಗೆ ಗೇಲಿ ಮಾಡುವುದು. “ ಒಂದನೆಯ ಕ್ಲಾಸ್ ಟೀಚರ್‌ಗೆ ಒಂದು ತಲೆಯಾದರೆ , ಹತ್ತನೆಯ ಕ್ಲಾಸ್ ಟೀಚರ್‌ಗೆ ಎಷ್ಟು ತಲೆ ?” ಎಂದು ಕಿರಿಕ್ ಪ್ರಶ್ನೆಗಳನ್ನು ಕೇಳುತ್ತಾ , ಮಕ್ಕಳ ಮುಖ ಭಾವನೆಯನ್ನೂ , ಅವರ ಉತ್ತರವನ್ನೂ ಕೇಳಿ ಅಪಹಾಸ್ಯ ಮಾಡುವುದು , ಮಜಾ ತೆಗ

"ಕೊಪ್ಪರಿಗೆಯ ಬೆಲ್ಲ" (2) - ಪ್ರಯಾಣ ಪರಿಚಯ

Image
ಪ್ರಯಾಣ ಪರಿಚಯ       ಏಳನೇ ತರಗತಿಯ ವಿದ್ಯಾರ್ಥಿಯಾದ ನಾನು ವರ್ಷವಿಡೀ ಕಾಯುವುದು ದಸರೆ , ಕ್ರಿಸ್ಮಸ್ ಹಾಗೂ ಬೇಸಿಗೆ ರಜಕ್ಕೆ. ಓದಿನಲ್ಲಿ ಜಾಣೆಯಾದರೂ ನನ್ನ ಆಸಕ್ತಿ ಕ್ರಿಯಾತ್ಮಕ ಕೈ ಕೆಲಸಗಳಲ್ಲಿ. ವಸ್ತುವಿನ ಮೇಲೆ ವ್ಯಾಮೋಹಕ್ಕಿಂತ ಬೇರೆ ಬೇರೆ ವಿಧವಾದ ಅನುಭವಗಳನ್ನು ಪಡೆಯುವುದರಲ್ಲೇ ನನಗೆ ಒಲವು ಹೆಚ್ಚು. ಇದೇ ಒಲವು ಹುಚ್ಚಾಗಿ ಜಾತಕ ಪಕ್ಷಿಯು ಮೊದಲ ಮಳೆಗೆ ಕಾಯುವಂತೆ ನಾನು ನನ್ನ ಅಜ್ಜಿ ಮನೆಗೆ ಹೋಗಲು ಕಾಯುತ್ತಿರುತ್ತಿದ್ದೆ. ಆ ನೆಲದ ಮಣ್ಣಿನ ಘಮ , ಗೊಬ್ಬರ ಗುಂಡಿಯ ವಾಸನೆ , ಮಾಗಿದ ಹಲಸಿನ ಪರಿಮಳವು ನನ್ನ ಮೂಗಿನಲ್ಲಿಯೇ ಇದೆ. ಬ್ಯಾಣದ ಮೇಲಿನ ಸುಳಿಗಾಳಿ ಹಾಗೂ ಕೆರೆಯ ಮೇಲಿನ ತಿಳಿಗಾಳಿಯ ಅನುಭೂತಿಯನ್ನು ಯೋಚಿಸಿದಾಗಲೆಲ್ಲಾ ನನ್ನ ಮುಂಗುರುಳು ಸರಿಯುತ್ತದೆ.       ಇನ್ನೆರಡು ದಿನಗಳಲ್ಲಿ ಕ್ರಿಸ್ಮಸ್ ರಜೆ ಪ್ರಾರಂಭವಾಗುತ್ತದೆ. ಅಂದು ಶಾಲೆಯಿಂದ ಬಂದ ನಾನು ಸುಧಾರಿಸಿಕೊಂಡು ಬಟ್ಟೆಬರೆ ಜೋಡಿಸಿಕೊಳ್ಳಲು ಪ್ರಾರಂಭಿಸಿದೆ. ನಾ ಹೊಗಲಿರುವ ಹಳ್ಳಿಯಲ್ಲಿ ಸುತ್ತಮುತ್ತ ೬ ಕಿ.ಮೀ. ವರೆಗೂ ಒಂದೂ ಅಂಗಡಿ ಇಲ್ಲ. ಗಾಡಿ ರಸ್ತೆಗೆ ಹೋಗಬೇಕೆಂದರೆ ತೋಟದಾಟಿ , ಗದ್ದೆ ಬದಿಯಲ್ಲಿ ನಡೆದು , ಅಡಿಕೆ ಮರದ ಸಾರ ದಾಟಿ , ಕಚ್ಚಾರಸ್ತೆಯಲ್ಲಿ ೨೦೦ ಮೀ. ಹೋಗಬೇಕು ಅಷ್ಟೆಲ್ಲಾ ಸಾಹಸ ಮಾಡುವುದಕ್ಕಿಂತ , ಕುರುಕಲು ತಿಂಡಿಗಳನ್ನು ಮೋದಲೇಹೊತ್ತು ಹೋಗುವ ಕೆಲಸಕ್ಕೆ ಪ್ರಥಮ ಆಧ್ಯತೆ ನೀಡುತ್ತಿದ್ದೆ. ಮೊಬೈಲ್ ಫೊನ್ ತೆಗೆದುಕೊಂಡು ಹೋಗುವ ಪ್ರಮೇಯವೇ ಇಲ್ಲ

"ಕೊಪ್ಪರಿಗೆಯ ಬೆಲ್ಲ" - ಪ್ರಾಸ್ತವಿಕೆ

Image
ಕೊಪ್ಪರಿಗೆಯ ಬೆಲ್ಲ “ ಸಂಪದವೆನಿಸಿತು ಬಣ್ಣಿಸಲಳವು ಕವನದಲಿ ? ಬೆಳಗಿನಲಿ ಬೈಗಿನಲಿ ಮಾಗಿಯಲಿ ಚೈತ್ರದಲಿ ಮಳೆಯಲಿ ಮಂಜಿನಲಿ ಹಗಲಿನಲಿ ರಾತ್ರಿಯಲಿ ದೃಶ್ಯವೈವಿದ್ಯಮಂಮ್ ರಚಿಸಿ ನೀಂ ಭುವನದಲಿ ಸ್ವರ್ಗವಾಗಿಹೆ ನನಗೆ! ”                                                  - ಕುವೆಂಪು   ಪ್ರಾಸ್ತವಿಕೆ       ಕವಿ ಶೈಲದಲಿ ಪುಟ್ಟಪ್ಪನಿಗೆ ಕಂಡ ಸ್ವರ್ಗ ನನಗೆ ನನ್ನ ಸಮಗೋಡಿನಲ್ಲಿ ಕಾಣುತ್ತದೆ. ಕೊಡಚಾದ್ರಿಯ ತಪ್ಪಲಲಿ , ಶರಾವತಿಯ ಸೆರೆಗಿನಲಿ , ತೆಂಗುಗಳ ನೆರಳಿನಲಿ ಬಚ್ಚಿಕೊಂಡು , ಅಕೇಶಿಯಾ ಗಾಳಿಯ ಸದ್ದಿನ ಮೂಲಕ ತನ್ನ ಇರುವಿಕೆಯನ್ನು ಉಸುರುತ್ತಿರುವ , ಚಿತ್ತಾಕರ್ಷಕವಾದ ಪಕ್ಷಿಗಳು , ಕೀಟಗಳಿಗೆ ಆಸರೆಯಾಗಿರುವ ತವರು ಆ ನನ್ನ ಮಲೆನಾಡು. ಅಲ್ಲಿ ಹೋಗುವ ಯೋಚನೆಯಿಂದಲೇ ನನ್ನ ತನುಮನ ಅರಳುತ್ತದೆ.      ಊಸರವಳ್ಳಿಯು ತನ್ನ ಬಣ್ಣ ಬದಲಿಸುವ ರೀತಿ ಮಲೆನಾಡು ; ಮಾಗಿಯಲಿ ಕೊರೆಯುವಚಳಿಯು , ವಸಂತದಲಿ ಚಿಗುರು , ಬೇಸಿಗೆಯಲ್ಲಿ ಹಲಸಿನ ಹಪ್ಪಳ ಒಣಗುವಷ್ಟು ಬಿಸಿಲು ಮತ್ತು ಮಳೆಗಾಲದಲ್ಲಿ ಅಡುಗೆ ಮನೆಯ ನೊಣದ ಗೂಯ್! ಗೂಯ್! ಸದ್ದೂ ಕೆಳಿಸದ ಆರ್ಭಟದಿಂದ ತನ್ನ ರುದ್ರರಮಣೀಯತೆಯನ್ನು ಬಿಂಬಿಸುತ್ತವೆ.      ಇಂತಹ ಮನೋಲ್ಲಾಸವನ್ನುಂಟು ಮಾಡುವ ವಾತಾವರಣ ಯಾರಿಗೆ ತಾನೆ ಬೇಡ ? ಇಲ್ಲಿನ ಪ್ರಕೃತಿ ಎಷ್ಟು ಸುಂದರವೋ , ಜನರು ಅಷ್ಟೇ ನಿಪುಣರು. ತಮ್ಮ ನಡವಳಿಕೆಯಲ್ಲಿ ಗೌರವವನ್ನು , ಭಾಷೆಯಲ್ಲಿ ಪ್ರೀತಿ ಮಮಕಾರವನ್ನೂ , ಕಾಯಕದಲ್