Posts

Showing posts from July, 2020

"ಕೊಪ್ಪರಿಗೆಯ ಬೆಲ್ಲ" (17) - ಅಯ್ಯೋ!...ರಜೆ ಮುಗೀತು...

Image
                                  ಅಯ್ಯೋ!...ರಜೆ ಮುಗೀತು...       ಕಣ್ಣರೆಪ್ಪೆ ಮುಚ್ಚಿ ಬಿಡುವಷ್ಟರಲ್ಲಿ ಕ್ರಿಸ್ಮಸ್ ರಜೆ ಮುಗಿದಿತ್ತು. ಇಷ್ಟು ಬೇಗ ಸಮಯ ಕಳೆದದ್ದು ಬೇಜಾರೆನಿಸಿದರೂ, ಒಂದು ನಿಮಿಷವನ್ನೂ ವ್ಯರ್ಥಮಾಡದೆ ಕಳೆದ ಒಂದೊಂದು ದಿನವೂ ನಮಗೆ ಅಭೂತಪೂರ್ವವಾದ ಆನಂದವನ್ನು ಕೊಟ್ಟಿದ್ದರಿಂದ, ಈ ರಜೆಯು ಒಂದು ರೀತಿಯ ಸಾರ್ಥಕತೆಯನ್ನು ಕೊಟ್ಟಿತ್ತು. ನಮ್ಮ ಕಮ್ಫರ್ಟ್ ಝೋನ್ ಅನ್ನು ದಾಟಿ, ಹಿಂದೆ ಕೈಗೊಳ್ಳದ ಅಡ್ವೆಂಚರ್ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದೆವು. ಅದಕ್ಕೆ ಕಳಶವಿಟ್ಟಂತೆ ಆದ ಹುಲಿಯ ಹೆಜ್ಜೆಯ ದರ್ಶನ, "ಎಲೆ ಮಾನವ ಪ್ರಕೃತಿಯ ಮುಂದೆ ನೀನು ನಶ್ವರ" ಎಂದು ತನ್ನದೇ ರೀತಿಯಲ್ಲಿ ಪ್ರದರ್ಶಿಸಿದಂತಿತ್ತು. ಆ ಘಳಿಗೆಯಲ್ಲಿ, "ಇದೇ ನಮ್ಮ ಜೀವನದ ಕೊನೆಯ ಕ್ರಿಸ್ಮಸ್ ರಜೆ" ಎಂದು ಈ ಪುಕ್ಕಲ ಮನಸ್ಸು ನಿರಾಯಾಸವಾಗಿ ಒಪ್ಪಿಕೊಂಡಿದ್ದ ನೆನೆದರೆ ಮೈ ರೋಮಾಂಚನವಾಗದೆ ಇರಲಾರದು. ಹೇಗೆ ಕಾಡು ಮೇಡು ಸಂಚಾರಿಯಾಗಿ, ತೋಟ ಗದ್ದೆಗಳಲ್ಲಿ ಓಟಗಾರರಾಗಿ, ಹಣ್ಣಿನ ಮರಗಳ ಭಕ್ಷಕರಾಗಿ, ಗುಡ್ಡಕ್ಕೆ ಬೆಂಕಿ ಇಟ್ಟ ಕೊಳ್ಳಿ ದೆವ್ವವಾಗಿ ಮೆರೆದ ನಮ್ಮ ಅವಿವೇಕತನಕ್ಕೆ ಏನನ್ನಬೇಕೋ ತಿಳಿಯದು! ಒಟ್ಟಾರೆಯಾಗಿ ನಾಳೆ ಶಾಲೆಯಲ್ಲಿ ಕ್ರಿಸ್ಮಸ್ ರಜೆ ಹೇಗೆ ಕಳೆದಿರಿ? ಎಂಬ ಟೀಚರ್ ನ ಸಹಜವಾದ ಪ್ರಶ್ನೆಗೆ, ನಾಲ್ಕು ಜನರಿಗೆ ನಲವತ್ತು ರೀತಿಯಲ್ಲಿ ಹೇಳಲು, ಸ್ವಲ್ಪ ವಿಷಯ ಸಿಕ್ಕಿದ ಹಾಗಾಯಿತಲ್ಲವೇ? "ಇಲಿ ಹೋಯಿತೆ

"ಕೊಪ್ಪರಿಗೆಯ ಬೆಲ್ಲ" (16) - " ನಾಗಮಣಿ "

Image
                                                                 "ನಾಗಮಣಿ"        ಸಂಜೆ ೭ ಘಂಟೆ, ಮಲೆನಾಡಿನ ಮಟ್ಟಿಗೆ ರಾತ್ರಿ ಎಂದೇ ಹೇಳಬಹುದು! ಆಲೆಮನೆಯ ಕೊಪ್ಪರಿಗೆಯ ಬೆಲ್ಲದ ಸವಿ ಬಾಯಲ್ಲಿಯೇ ನೆಲೆಸಿತ್ತು, ನೀರು ಬೆಲ್ಲದ ಸುವಾಸನೆ ಇನ್ನು ಮೂಗಿನಿಂದ ಹೋಗಿರಲಿಲ್ಲ. ಒಂದು ದೊಡ್ಡ ಸಂಭ್ರಮಕ್ಕೆ ನಾವೆಲ್ಲರೂ ಸಾಕ್ಷಿಯಾದಂತೆ ಭಾಸವಾಗುತ್ತಿತ್ತು. ವಿಶೇಷವಾದಮೇಲೆ ಸಂಜೆಯ ವೇಳೆ ಪಾರಾಯಣಕ್ಕೆ ಕೂರಲಿಲ್ಲವೆಂದರೆ ಅದರ ಪ್ರತಿಷ್ಠೆಗೆ ಕುತ್ತಲ್ಲವೇ? ಆಲೆಮನೆಗೆ ಊರಮನೆಯವರು, ನೆಂಟರಿಷ್ಟರು ಬಂದಮೇಲೆ; ಜಾಕಿ, ಎಕ್ಕ, ರಾಜ, ರಾಣಿ  ಕರಿಯ ಕಂಬಳಿಯ ಮೇಲೆ ಆಸೀನರಾಗಲೇಬೇಕಲ್ಲವೇ?! ಕಂಬಳಿಯ ಸುತ್ತ ರಮ್ಮಿ ಆಟಕ್ಕೆ ಕೂತ ನಮಗೆ ಪರಂಪರಾಗತವಾಗಿ ಬಂದ ಒಂದು ಸಂಪ್ರದಾಯವನ್ನು ಪಾಲಿಸಿದಷ್ಟು ಖುಷಿಯಾಗುತ್ತಿತ್ತು.  'ಸೀಕ್ರೆಟ್ ಸೆವೆನ್' ಆಟದಲ್ಲಿ ಜೋಕರ್ ನ ಸೀಕ್ರೆಟ್ ಹೇಗೆ ಬಯಲಾಗುತ್ತದೆಯೋ ಹಾಗೆಯೇ ಮಲೆನಾಡಿನ ಬಹಳಷ್ಟು ಕಥೆಗಳು, ನಿಗಢಗಳು ಒಂದೊಂದೇ ಬಯಲಿಗೆ ಬರತೊಡಗಿದವು. ನಿದಾನವಾಗಿ ಆಟದಮೇಲಿನಿಂದ ಮನಸ್ಸು ಸರಿದು, ಆ ಮಲೆನಾಡಿನ ಜನರ ಜೀವನ ಹಾಗು ಅವರಿಗೆ ಎದುರಾದ ನೈಜ ಸನ್ನಿವೇಶಗಳು ಹಾಗು ಕೆಲವು ವಿಸ್ಮಯಕಾರಿ ವಿಷಯಗಳ ಮೇಲೆ ಬಂದು ನಿಂತಿತು. ಮನೆಯ ಹಿರಿಯರು ಒಂದೊಂದೇ ವಿಷಯಗಳ ಬಗ್ಗೆ ಚರ್ಚೆಗೆ ಸನ್ನದ್ಧರಾದಂತೆ ತೋರಿ ಕೆಲ ಹೆಂಗಸರು, "ಇದು ಮುಗಿಯದೆ ಕಥೆ" ಎಂದು ಅನ್ನಕ್ಕೆ ಇಡಲು ಅಡುಗೆಮನೆ ಹೊಕ್ಕರು.

"ಕೊಪ್ಪರಿಗೆಯ ಬೆಲ್ಲ" (15) - ಆಲೆಮನೆಯೆಂಬ ವಿಶೇಷದಮನೆ!!

Image
ಆಲೆಮನೆಯೆಂಬ ವಿಶೇಷದಮನೆ!!       ಕೊಪ್ಪರಿಗೆಯ ಬೆಲ್ಲದ ರುಚಿ ನೋಡುವ ದಿನ ಕೊನೆಗೂ ಬಂದೆ ಬಿಟ್ಟಿತು. ಎದ್ದ ಕೂಡಲೇ ಮಾಡಿದ ಮೊದಲನೆಯ ಕೆಲಸ ಹಲ್ಲು ಉಜ್ಜುತ್ತಾ ಹಿತ್ತಲ ಅಂಗಳದ ತುದಿಯಲ್ಲಿ ನಿಂತು ಆಲೆಮನೆಯ ಚಲನ ವಲನಗಳನ್ನು ವೀಕ್ಷಿಸಿದ್ದು. ಅಷ್ಟರಲ್ಲಾಗಲೇ ಅಲ್ಲಿ ಒಂದೆರಡು ಕೆಲಸದ ಆಳು ರಾಶಿ ಹಾಕಲಾದ ಕಬ್ಬಿನ ಹೊರೆಗೆ ಕೈ ಹಾಕಿಯಾಗಿತ್ತು.  ಆಲೆಕಣೆಯನ್ನು ತಿರುಗಿಸಲು ಕೋಣಗಳು ಸನ್ನದ್ಧವಾಗಿ ನಿಂತಿದ್ದವು. ಬೇಗ ತಿಂಡಿ ಸ್ನಾನ ಎನ್ನುವ ಶಾಸ್ತ್ರವನ್ನು ಮುಗಿಸಿ ಆಲೆಮನೆಗೆ ಹೋಗುವ ಕೌತುಕ ನಮ್ಮಲ್ಲಿ ಹೆಚ್ಚಾಯಿತು.       ಭೂಮಿಯು ಸೂರ್ಯನ ಸುತ್ತ ಸುತ್ತುವ ಹಾಗೆ ಜೋಡಿ ಕೋಣಗಳು ಓಡಿಸುವವನ ಅನಕೆಯಂತೆ, ಕಬ್ಬಿನಿಂದ ಹಾಲನ್ನು ತೆಗೆಯಲು ಗಾಣವನ್ನು ತಿರುಗಿಸುವ ಮೂಲಕ ಆಲೆಕಣೆ ಸುತ್ತ, ಸುತ್ತ ಹಾಕತೊಡಗಿದವು.  ಪಾಲಕನಿಂದ ಕೋಣಗಳಿಗೆ ಬರುತ್ತಿದ್ದ ಪ್ರೋತ್ಸಾಹದ ಹೊಯ್! ಹೊಯ್! ಸದ್ದು ಹಾಗು ಅವನ ರಾಗ ಮನರಂಜಿಸುವಂತಿತ್ತು. ಆಲೆಕಣೆಗೆ ಕಬ್ಬನ್ನು ಕೊಡಲು ಭೋಜ ಕುಳಿತಿದ್ದನು. ನಮಗೆಲ್ಲರಿಗೂ ಕಬ್ಬು ಕೊಡುವ ಕೆಲಸವು ಸರತಿಯಲ್ಲಿ ದೊರಕಲು, ನಾವುಗಳು ಖುಷಿಯಿಂದಲೇ ಮಾಡಿದೆವು. ವದಿಗೆಯ ಮೂಲಕ ಕಡಾಯಿಗೆ ಹರಿಯುತ್ತಿದ್ದ ಕಬ್ಬಿನ ಹಾಲು ಹಾಗು ಅದರ ಹಿತವಾದ ಘಮ ಮನಸ್ಸಿಗೆ ಹಾಯ್ ಅನಿಸುವಂತಿತ್ತು. ನಮಗೆಲ್ಲರಿಗೂ ಕುಡಿಯಲು ಸಾಕೆನ್ನಿಸುವಷ್ಟು ಕಬ್ಬಿನಹಾಲು.  ಕಬ್ಬಿನಹಾಲು ಇಳಿಸುವ ಪೈಪೋಟಿಯೇ ಅಲ್ಲಿ ಪ್ರಾರಂಭವಾಗಿ, ಹೊಟ್ಟೆ ಅಳತೆ ತಪ್ಪಿ ಕುಡಿದಿದ್ದರಿಂದ ಒಬ್ಬ

"ಕೊಪ್ಪರಿಗೆಯ ಬೆಲ್ಲ" (14) - 'ಪೂರ್ವ ಸಿದ್ಧತೆ'

Image
'ಪೂರ್ವ ಸಿದ್ಧತೆ'        ಆಲೆಮನೆಯ ಸಂಭ್ರಮಕ್ಕೆ ಇನ್ನು ಒಂದೇ ದಿನ ಬಾಕಿ ಇರಲು, ನಮ್ಮ ಕಾಲು ನೆಲದ ಮೇಲೆ ನಿಂತಿರಲಿಲ್ಲ. ಇಷ್ಟುದಿನ ನಮ್ಮ ಓಡಾಟ ಮನೆಯ ಅಂಗಳದಿಂದ ಕೊಟ್ಟಿಗೆಯ ತನಕವಿದ್ದದ್ದು ಈಗ ಆಲೆಮನೆಯ ಗದ್ದೆಯ ತನಕ ಮುಂದುವರೆಯಿತು.  ನೋಡಿದವರಿಗೆ ಆಲೆಮನೆಯ ಸಂಪೂರ್ಣ ಮೇಲ್ವಿಚಾರಣೆಯನ್ನು ಇವರುಗಳೇ ನೋಡಿಕೊಳ್ಳುತ್ತಿದ್ದಾರೆ! ಎನ್ನುವ ರೀತಿ, ಪ್ರತಿಯೊಂದನ್ನು ಕುತೂಹಲದಿಂದ ನೋಡಿ ಪರಿಶೀಲಿಸುತ್ತಿದ್ದೆವು. ಹೋಗುತ್ತಾ ಬರುತ್ತಾ ಅಲ್ಲಿ ರಾಶಿ ಹಾಕಿರುವ ಕಬ್ಬಿನಲ್ಲಿ ಕಪ್ಪುಕೆಂಪು ಬಣ್ಣದ ದಾಸ್ ಕಬ್ಬನ್ನು ಹಾರಿಸಿಕೊಂಡು ಓಡುತ್ತಿದ್ದೆವು. 'ಆಲೆಕಣೆಯನ್ನು ನೇರಳೆಮನೆಯಿಂದ' ಬಾಡಿಗೆಗೆ ತೆಗೆದುಕೊಂಡಿದ್ದು ಅದು ಅಂದು ಮುಂಜಾನೆಯೇ ಬಂದು ಅದರ ನಿರ್ದಿಷ್ಟ ಸ್ಥಾನದಲ್ಲಿ ಪ್ರತಿಷ್ಠಾಪನೆಗೊಂಡಿತ್ತು.  ಅದರ ಮುಂದೆ ತೋಡಿದ ಹೊಂಡದಲ್ಲಿ ಕಬ್ಬಿನ ಹಾಲನ್ನು ತುಂಬಿಸಿಕೊಳ್ಳಲು ಒಂದು ದೊಡ್ಡ ಕಡಾಯಿಯನ್ನು ಕೂರಿಸಿ ಅದಕ್ಕೆ ಹಾಲನ್ನು ಸಾಗಿಸುವ ವದಿಗೆಯನ್ನು ಸೇರಿಸಿದ್ದರು. ನಾವುಗಳು ಬಿಸಿಲಿನಲ್ಲಿ ಅಂದಿನ 'ಷೋಸ್ ಸ್ಟಾಪರ್ಗಳಾದ ಕೋಣಗಳ' ಬರುವಿಕೆಯನ್ನೇ ಕಾಯುತ್ತಾ, ಕೋಣಗಳ ಬಣ್ಣವೇ ಆಗಿ ಹೋಗಿದ್ದೆವು!         ಆಲೆಮನೆ ಎಂದರೆ 'ವಿಶೇಷದಮನೆ' ಎಂದೇ ಪರಿಗಣಿಸಲಾಗುತ್ತಿತ್ತು. ಊರಿನವರೆಲ್ಲ ಬಂದು ಅಷ್ಟೇ ಸಂತೋಷದಿಂದ  ಭಾಗಿಯಾಗುತ್ತಿದ್ದರು. ಅದರಂತೆಯೇ 'ಆಲೆಮನೆಯ ಹೇಳಿಕೆಯು' ಸಹ ಅಷ್ಟೇ ಮಹತ್ವವನ್ನು ಪಡೆದ

"ಕೊಪ್ಪರಿಗೆಯ ಬೆಲ್ಲ" (13) - ನೀನಾ?....ಕಾಡುಕೋಣ!

Image
ನೀನಾ?....ಕಾಡುಕೋಣ!         ಮರು ದಿನ ಮಬ್ಬು ಹರಿಯುತ್ತಿದ್ದಂತೆ ಒಬ್ಬೊಬ್ಬರೇ ಮನೆಗೆ ಆಗಮಿಸಿತೊಡಗಿದರು. ಪ್ರತಿಬಾರಿಯಂತೆ ಈ ಬಾರಿಯೂ ಮೊದಲು ಬಂದು ಎಲ್ಲರ ಸ್ವಾಗತಕ್ಕಾಗಿ ಹಣ್ಣುಗಳ ಮೇಳವನ್ನೇ ತರಿಸಿದ್ದೆವು. ಈ ಬಾರಿಯ ವಿಶೇಷವೆಂದರೆ ಇನ್ನೆರಡು ದಿನಗಳಲ್ಲಿ ನಡೆಯಲಿರುವ  'ಆಲೆಮನೆ'. ಅದಕ್ಕಾಗಿ ಕೇವಲ ನೆಂಟರಿಷ್ಟರಲ್ಲದೆ ಊರಿನ ಜನರೆಲ್ಲಾ ಒಟ್ಟಿಗೆ ಸೇರುವ ಸಂಭ್ರಮ! ಅದಕ್ಕಾಗಿ ಕ್ಷಣಗಣನೆ ಆರಂಭವಾಗಿತ್ತು. ತಯಾರಿಯೂ ಭರದಿಂದ ಸಾಗಿತ್ತು  ಆಲೆಮನೆಯ 'ಕಂಪ್ಲೀಟ್ ಎಂಜೋಯ್ಮೆಂಟ್ಗಾಗಿಯೇ ನಮ್ಮೆಲ್ಲಾ ಅಡ್ವೆಂಚರ್ಗಳನ್ನು ಆ ಮೊದಲೇ ಮುಗಿಸಿಕೊಂಡಿದ್ದೆವು'.          ನಮ್ಮ ಅಂದಿನ ದಿನ ಬೇಗವೇ ಪ್ರಾರಂಭವಾಗಿತ್ತು. ಆ ಮೊದಲು ಅಡುಗೆಮನೆಯ ನೊಣದ ಸದ್ದೂ ಕೇಳಿಸುವಷ್ಟು ನಿಶ್ಯಬ್ಧತೆ ಇದ್ದ ಮನೆಯಲ್ಲಿ ಈಗ ಕಿರುಚಿದರೂ ಯಾರಿಗೂ ಕೇಳಲಾರದಷ್ಟು ಗಲಾಟೆ-ಗೌಜು!. ಮನೆ ಜನಗಳಿಂದ ತುಂಬಿ ತುಳುಕುತ್ತಿತ್ತು. ಅಡುಗೆ ಮನೆ, ದೇವರ ಒಳ, ಉಪ್ಪರಿಗೆ, ಜಗುಲಿ, ಅಂಗಳ,  ಹಿತ್ತಲು, ಕೊಟ್ಟಿಗೆ, ತೋಟ, ಕೆರೆ-ಕಟ್ಟೆ ಹೀಗೆ ಎಲ್ಲಿ ನೋಡಿದರೂ ಅಲ್ಲಿ ಹೆಂಗಸರ ಹರಟೆ. ಕೂತಲ್ಲಿ ನಿಂತಲ್ಲಿ ಎಲೆ-ಅಡಿಕೆ ಹಾಗು ಬಿಸಿ ಬಿಸಿ ಕಾಪಿಯ ಅನುಪಾನ! ಒಟ್ಟಾರೆ ಮನೆಯ ಪರಿಸರ ಆ ಮಲೆನಾಡಿನ ನೀರವ ಮೌನವನ್ನು ಹಾಸ್ಯ ಮಾಡುವಂತಿತ್ತು!          ಪಂಕ್ತಿಯಲ್ಲಿ ಕುಳಿತು ಬಾಳೆ ಎಲೆಯಲ್ಲಿ ಕಡುಬು ತಿಂದು ಕಾಪಿ ಕುಡಿಯುತ್ತಾ, ನಗು ತಮಾಷೆ ಒಬ್ಬರನ್ನೊಬ್ಬರು ಕಾಲು ಎಳೆಯುವುದು

"ಕೊಪ್ಪರಿಗೆಯ ಬೆಲ್ಲ" (12) - ಗುಡ್ಡಕ್ಕೆ ಬೆಂಕಿ ಇಟ್ಟನಾ?...ಆ ಕೊಳ್ಳಿ ದೆವ್ವ!

Image
ಗುಡ್ಡಕ್ಕೆ ಬೆಂಕಿ ಇಟ್ಟನಾ?....ಆ ಕೊಳ್ಳಿ ದೆವ್ವ!            ಅಂದು ನಾವಿಬ್ಬರು ರಾಜರೋಷವಾಗಿಯೇ ಮನೆ ಸೇರಿದ್ದೆವು. ಮನೆಯವರೆಲ್ಲಾ ಮಾರನೆಯ ದಿನದ ತಿಂಡಿಗೆ 'ಹಲಸಿನ ಎಲೆಯ ಕೊಟ್ಟೆ' ಕಟ್ಟುವುದರಲ್ಲಿ ವ್ಯಸ್ಥವಾಗಿದ್ದರು. ಅವರಿಗೂ, ನಮಗೆ ಬುದ್ದಿ ಹೇಳಿ ಹೇಳಿ ಸಾಕಾಗಿತ್ತು!. "ಇವರು ನಮ್ಮ ಕೈ ಸಿಗದಿದ್ದರೂ ಪರವಾಗಿಲ್ಲ ನಮಗೆ ತೊಂದೆರೆಯೊಂದಾಗದಿದ್ದರೆ ಸಾಕು" ಎನ್ನುವ ಮನಸ್ಥಿತಿ ಬಹುಷಃ. ನಾವು ಅಡುಗೆಮನೆಯಲ್ಲಿ ನಮ್ಮ ಪಾಡಿಗೆ ಬಾಳೆ ಎಲೆಯನ್ನು ಹಾಕಿಕೊಂಡು ಸದ್ದಿಲ್ಲದೆ ಊಟ ಮುಗಿಸಿದೆವು. ಆದರೆ ಪಾಪ ಸುಬ್ಬು, ಮುಳ್ಳಿನ ಕೋಲಿಗೆ ಹೆದರಿ ಅದೆಲ್ಲಿ ಅಡಗಿ ಕುಳಿತಿದ್ದಾನೋ ಆ ದೇವರೇ ಬಲ್ಲ! ಊಟ ಮುಗಿಸಿ ನಾವು ಬೆವರು ಸುರಿಸಿ ಸಂಪಾದಿಸಿದ ಆ ದಿನದ ಸಂಪತ್ತನ್ನು ಎಲ್ಲರಿಗೂ ತೋರಿಸಿ ಹೆಮ್ಮೆ ಪಟ್ಟೆವು. ನಮ್ಮ ಪುಣ್ಯ ಯಾರು ಏನು ಅನ್ನಲಿಲ್ಲ.          ಮಧ್ಯಾಹ್ನ ಕಳೆದು ಸಂಜೆಯಾಗುತ್ತಾ ಬಂದಿತ್ತು ಬಿಸಿಲು ಪಕ್ಕಕ್ಕೆ ಸರಿದು ತಣ್ಣನೆಯ ಗಾಳಿಯ ಸುಳಿದಾಟ ಆರಂಭವಾಯಿತು. ನಮಗೋ, ಉಳಿದುಹೋದ ಬಹುಮುಖ್ಯವಾದ ಒಂದು ಕೆಲಸದ ಬಗ್ಗೆಯೇ ಆಲೋಚನೆ! ಇನ್ನೇನು 'ಕೊಲ್ಲೂರು ಗಾಡಿಗೆ' ಭೀಮ ಭಟ್ಟರ ಮೊಮ್ಮಕ್ಕಳು ಬಂದುಬಿಡುತ್ತಾರೆ. 'ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲ' ಎಂದು ಯೋಚನೆಗೀಡಾದೆವು. ಅಷ್ಟರಲ್ಲಿ ಗೊಬ್ಬರ ಗುಂಡಿಯ ಪಕ್ಕದಿಂದ ವಿಚಿತ್ರ ಧ್ವನಿ ಕೇಳಲಾರಂಭಿಸಿ ಆ ಕಡೆ ತಿರುಗಿ ನೋಡಲು ಸುಬ್ಬು ತನ್ನ ವಿರಾಟ ದರ

"ಕೊಪ್ಪರಿಗೆಯ ಬೆಲ್ಲ" (11) - ಫಲ ಸಂತರ್ಪಣೆ!

Image
  ಫಲ ಸಂತರ್ಪಣೆ!      ಸುಬ್ಬುವಿನ ಮನೆಯ ಚಿಟ್ಟೆಯ ಮೇಲೆ ಕುಳಿತು ನಾವು ಮೂವರು, ಅಷ್ಟದಿಕ್ಕುಗಳಲ್ಲಿ ದೊರೆಯುವ ಹಣ್ಣುಗಳ ಪಟ್ಟಿ ಮಾಡಿ, ಯಾವ ದಿಕ್ಕಿನಿಂದ ಶುರು ಮಾಡಬೇಕೆಂದು 'ಪ್ಲಾನ್ ಆಫ್ ಆಕ್ಷನ್' ಸಿದ್ಧಪಡಿಸಿದೆವು. ಅದರ ಪ್ರಕಾರ ಮೊದಲು ಸ್ವಲ್ಪ 'ದುರ್ಗಮ ಪ್ರದೇಶದಲ್ಲಿದ್ದ ಪನ್ನೇರಳೆ' ಹಣ್ಣಿನ ಮರದಿಂದ ಪ್ರಾರಂಭಿಸಿ, 'ತೋಟದ ಒಳಗಿದ್ದ ಅಂಬರಲೇ ಹಣ್ಣಿನ ಮರ', ನಂತರ 'ಬ್ಯಾಣದ ಬಾಳೆ ಗುಡ್ಡಕ್ಕೆ ತಾಗಿಗೊಂಡಿದ್ದ ನೇರಳೆ ಮರ' ಹಾಗು ಕೊನೆಯದಾಗಿ 'ಅಣ್ಣೀಭಟ್ರು ಮನೆ ಗದ್ದೆಯಲ್ಲಿದ್ದ ಪೇರಳೆ ಮರ' ಅದರಲ್ಲೂ ಸಾರದ ಬಳಿ ಇರುವ 'ಚಂದ್ರ ಪೇರಳೆ' ಹಣ್ಣಿನ ಭೇಟೆ ಹಣ್ಣುಗಳ ಪಟ್ಟಿಯಲ್ಲಿ ಪ್ರಮುಖವಾಗಿತ್ತು.      ನಾನು ಸುಬ್ಬು ಸೇರಿ  ಹೆಗಲಿಗೆ ದೊಟಿಯನ್ನು ಏರಿಸಿಕೊಂಡೆವು, ತಂಗಿ ಹಣ್ಣುಗಳನ್ನು ತುಂಬಿಸಲು ತೋಟದಲ್ಲಿ ಬಿದ್ದಿರುವ ಅಡಿಕೆ ಹಾಳೆಯನ್ನು ಆರಿಸಿಕೊಂಡಳು. ಮೂವರು ಪನ್ನೇರಳೆ ಮರದ ಕಡೆ ಹೆಜ್ಜೆ ಹಾಕಿದೆವು. ಸುಬ್ಬು ಮನೆ ತೋಟದ ಕೊನೆಯ ಮುರುಕಲು ಸಾರ ದಾಟಿ ಇಕ್ಕಟ್ಟಿನ ಪ್ರದೇಶದಲ್ಲಿ ಏರಿಯ ತುತ್ತ ತುದಿಯಲ್ಲಿರುವ ಮರವೇ ಪನ್ನೇರಳೆ ಹಣ್ಣಿನದು.  ಸಾರವನ್ನು ದಾಟುವಾಗಲೇ ಅರ್ಧ ಜೀವ ಹೋಗಿರುತ್ತದೆ, ಇನ್ನು ಹಣ್ಣಿನ ಆಸೆಗಾಗಿ ಜಾಸ್ತಿ ಬಗ್ಗಿದರೆ ಮಗಚಿ ಆಳವಾದ ಹಳ್ಳಕ್ಕೆ ಬೀಳುವುದು ಖಂಡಿತ. ಸುತ್ತಲೂ ಮರ, ಸೂರ್ಯನ ಬೆಳಕು ಅಷ್ಟಾಗಿ ಬೀಳದ ಜಾಗ, ಕತ್ತಲೆಯಲ್ಲಿ ಕಪ್ಪಾಗಿ ತೋರುತ್ತಿರುವ

"ಕೊಪ್ಪರಿಗೆಯ ಬೆಲ್ಲ" (10) - ಉತ್ತಿಷ್ಠತಾ ಜಾಗ್ರತಾ!

Image
ಉತ್ತಿಷ್ಠತಾ ಜಾಗ್ರತಾ!       ತೆಂಗಿನ ಗರಿಯ ಪರಕೆಯ ಪರ ಪರ ಸದ್ದಿನಿಂದಲೇ ನನಗೆ ಎಚ್ಚರವಾದದ್ದು. ನಾ ಮಲಗಿರುವ ಹಾಸಿಗೆಯೊಂದು ನನ್ನ ಹೊತ್ತು ಆ ಜಗುಲಿಯ ಮೇಲೆ ಅನಾಥವಾಗಿ ಬಿದ್ದಿತ್ತು.  ಕಿಟಕಿಯಿಂದ ನುಸುಳುತ್ತಿದ್ದ ಬಿಸಿಲಿನ ಕೊಲು, ರೆಡಾಕ್ಸಿಡ್ ನೆಲದ ಮೇಲೆ ಕೂತಿರುವ ಧೂಳಿನ ಕಣಗಳನ್ನೂ ಹಾಗು ಅದರೊಂದಿಗೆ ಗುದ್ದಾಟ ನಡೆಸುತ್ತಿರುವ ನೊಣಗಳನ್ನೂ ಎದ್ದು ತೋರಿಸುತ್ತಿತ್ತು. ಹಿತ್ತಲಲ್ಲಿ ಯಾರೋ ನಮ್ಮ ಮುಳುಗಡೆ ಪರಿಕ್ರಮಣದ ಕಥೆಯನ್ನು ಸವಿಸ್ತಾರವಾಗಿ ಹೇಳುತ್ತಿದ್ದುದ ಕೇಳಿ,  ಹಿಂದಿನ ರಾತ್ರಿಯ ಕನಸಿನಲ್ಲಿ ಕಾಡಿದ ಹುಲಿಯ ಚಿತ್ರಣ ಕಣ್ಣ ಮುಂದೆ ಮಿಂಚಿ ಮರೆಯಾಯಿತು. ನಾನು ರಸವತ್ತಾಗಿ ಹೇಳಬೇಕೆಂದುಕೊಂಡ ಕಥೆಯನ್ನು ನನಗೂ ಮುಂಚೆ ನನ್ನ ತಂಗಿಯೇ ಹೇಳಿಬಿಟ್ಟಳಲ್ಲಾ! ಎಂದು ನೀರಾಶೆಯಾದರೂ 'ನನ್ನ ಲಪ್ಪಿ' ಇದ್ದಾಳಲ್ಲ ಅವಳಿಗೆ ಹೇಳಿದರಾಯಿತು ಎಂದು ಸಮಾಧಾನಗೊಂಡೆ. ಎದ್ದ ಕೂಡಲೇ ಎಷ್ಟೆಲ್ಲಾ ಆಲೋಚನೆಗಳು! ಇದರ ಮಧ್ಯೆ ನನ್ನ ದೇಹದ ಕೂಗು ನನಗೆ ಕೇಳಿಸದೇ ಹೋಯಿತೇ?...       ಪರಕೆ ಹಿಡಿದು ನನ್ನ ಅಮ್ಮ ದೇವರ ಒಳದಿಂದ ಬಂದು, "ನೀನು ಹಾಸಿಗೆ ಮಾಡಿಸಿದರೆ ಈ ಒಳ ಗುಡಿಸಬಹುದೆಂದರು".ನನ್ನ ಆಗಿನ ಪರಿಸ್ಥಿತಿಯಲ್ಲಿ ನನ್ನ ಮೆದುಳಿಗೆ ಎಚ್ಚರವಾಗಿತ್ತೇ ಹೊರತು ದೇಹಕ್ಕಲ್ಲ! ಮೇಲೇಳಲು ಕಷ್ಟವಾಯಿತಾದರೂ ಎದ್ದು ನಿಂತೆ. ನನ್ನ ತಂಗಿಗೆ ಹಾಸಿಗೆ ಮಾಡಿಸಲು ಹೇಳಿ ಮುಖ ತೊಳೆಯಲು ಬಚ್ಚಲ ಕಡೆಗೆ ಮುಖ ಮಾಡಿದೆ. ಮೇಲ್ನೋಟಕ್ಕೆ ಜ್ವರ ಇಲ್ಲದಿದ್ದರ

"ಕೊಪ್ಪರಿಗೆಯ ಬೆಲ್ಲ" (9) - ಮಧ್ಯರಾತ್ರಿಯ ಮಂತ್ರ ಭೋದನೆ!

Image
                           ಮಧ್ಯರಾತ್ರಿಯ ಮಂತ್ರ ಬೋಧನೆ !!       ಜೀವ ಕೈಯಲ್ಲಿ ಹಿಡಿದು ಮನೆಯ ಅಂಗಳಕ್ಕೆ ಬಂದ ನಮಗೆ ಚಿಂತಾಕ್ರಾಂತವಾದ ಅಮ್ಮನ ಮುಖ ಕಾಣಿಸಿತು. ಸೂರ್ಯಾಸ್ಥ ನೋಡಿ ಬರುತ್ತೇವೆ ಎಂದು ಹೋದವರು ಹೊತ್ತಾದರೂ ಬರದೇ ಇರಲು ಲಪ್ಪಿ ಆಚೆ ಮನೆಗೆ ಹೋಗಿ ಸುಬ್ಬ ಬಂದಿದ್ದಾನೆಯೇ? ಎಂದು ವಿಚಾರಿಸಿಕೊಂಡು ಬಂದಿದ್ದಳು. ಇನ್ನೇನು ಅವರೇ ಬ್ಯಾಣದ ಬಳಿ ನಮ್ಮನ್ನು ಹುಡುಕಲು  ಹೊರಡುವರಿದ್ದರು ಅಷ್ಟರಲ್ಲಿ ನಾವಿಬ್ಬರು ನಿತ್ರಾಣರಾಗಿ ಮನೆಗೆ ಬಂದು ಜಗಲಿಯ ಮೇಲೆ ಉರುಳಿದೆವು. ನಮ್ಮ ಸ್ಥಿತಿ ಎಲ್ಲರನ್ನೂ ಗಾಬರಿಗೊಳಿಸದೆ ಇರಲಿಲ್ಲ. ಅತ್ತೆ, ಅಡುಗೆ ಮನೆ ಇಂದ ಬಿಸಿ ಬಿಸಿ ಹಾಲನ್ನು ಕುಡಿಯಲು ತಂದರು. ಅಮ್ಮ ನಮ್ಮಿಬ್ಬರಿಗೆ ಮೊದಲು ಕೊಡಪಾನದ ತಣ್ಣನೆಯ ನೀರನ್ನು ಕುಡಿಸಿ ನಂತರ ಅತ್ತೆ ತಂದ ಹಾಲನ್ನು ಕೊಟ್ಟಳು. ಆಗ ನಮಗೆ ಮಾತನಾಡಲು ಚೇತನ ಬಂದದ್ದು. ಅಲ್ಲಿಯವರೆಗೂ ನಮ್ಮ ಸ್ಥಿತಿಯನ್ನು ನಾವೇ ಗಮನಿಸಿರಲಿಲ್ಲ.       ಇಂಬಳ ಕಚ್ಚಿ ಸುರಿದ ನೆತ್ತರಿನಲ್ಲಿ ನಮ್ಮಿಬ್ಬರ ಕಾಲಿನ ಬೆಳ್ಳಿ ಗೆಜ್ಜೆ ತೊಯ್ದು ಹೋಗಿತ್ತು. ಎಲ್ಲಾ ಆ ಹವಾಯ್ ಚಪ್ಪಲ್ ನ ಮಹಿಮೆ!, ಅಲ್ಲಲ್ಲಿ ತರಚಿದ ಗಾಯ, ಹರಿದ ಬಟ್ಟೆ, ಕೆದರಿ ಗಂಟಾದ ತಲೆಗೂದಲು, ಶೋಕಿಗೆ ಹಾಕಿದ ಕ್ಯಾಪ್ ಅದೆಲ್ಲೋ ಬಿದ್ದು ಹೋಗಿತ್ತು, ಹರಳೆಣ್ಣೆ ಕುಡಿದ ಮುಖ, ಕಾಂತಿ ಹೀನ ಕಣ್ಣುಗಳು, ನೆಟ್ಟಗೆ ಕೂರಲೂ ಬಲವಿಲ್ಲದೆ ಬಗ್ಗಿರುವ ಬೆನ್ನು, ದೇಹದೆಲ್ಲೆಡೆ ಎಣಗು ಕಚ್ಚಿ ಬಿಟ್ಟ ತುರಿಕೆ ಹಾಗು ಎಲ್ಲದಕ್ಕಿಂತ ಹೆಚ

"ಕೊಪ್ಪರಿಗೆಯ ಬೆಲ್ಲ" (8) - ಮಹಾ ಪಲಾಯನ!

Image
                    ಮಹಾ ಪಲಾಯನ!       ಅನತಿ ದೂರದಲ್ಲಿ ಯಾರದೋ 'ಹೆಜ್ಜೆ' ಗುರುತು ಕೇಳಲು, ನಮ್ಮ ಮನಸ್ಸಿನಲ್ಲಿ ಮೂಡಿದ ಭಯಾನಕ ಕಲ್ಪನೆಗಳು ಹುಚ್ಚೆದ್ದು ನಮ್ಮನ್ನು ಹೆದರಿಸಿದ್ದವು!. ನಾವು ನೋಡಿದ ಹೆಜ್ಜೆ ಗುರುತಿನಿಂದ, "ಹುಲಿಯೇ ಎದ್ದು ಬಂದರೆ? ಏನು ಗತಿ!" ಎಂಬ ದಿಗಿಲು ಹುಟ್ಟಿತು. ಹಾಗು ಹೀಗೂ ಕೊಂಚ ಧೈರ್ಯವನ್ನು ಬಾಚಿಕೊಂಡು ಮೂವರೂ ಹತ್ತಿರ ಹತ್ತಿರ ನಿಂತೆವು. "ಬರ್ತ್ಯನೋ? ಬಾ!" ಎಂಬ ಕಿಚ್ಚು ನಮ್ಮ ಪುಕ್ಕಲು ಮನಸ್ಸಿನಲ್ಲಿ ಆ ವನದೇವತೆಯೇ ಹಚ್ಚಿದಂತ್ತಿತ್ತು. ಅಷ್ಟರಲ್ಲಿ ಆ ಹೆಜ್ಜೆ ಸಪ್ಪಳ ಮನುಷ್ಯಾಕೃತಿಯನ್ನು ತಾಳುವುದ ನೋಡಿ ಸ್ವಲ್ಪ ಮನಸ್ಸಿಗೆ ನಿರಾಳವಾದರೂ, ಯಾರಿರಬಹುದು? ಎಂಬ ಸಂಶಯವೂ ಜೊತೆಗೆ ಕಾಡಿತ್ತು.       ಪಂಚೆ ಎತ್ತಿಕಟ್ಟಿಕೊಳ್ಳುತ್ತಾ ಬರುತ್ತಿದ್ದ ಚಿಕ್ ಮಾವನನ್ನು ನೋಡಿ ಆದ ಸಂತೋಷ ಯಾವತ್ತಿಗೂ ಯಾರನ್ನು ನೋಡಿ ಆಗಿರಲಿಲ್ಲ. ನಮ್ಮ ಬಳಿ ಬಂದ ಮಾವನ ದೃಷ್ಟಿ ಆ ಹೆಜ್ಜೆ ಗುರುತಿನತ್ತ ಬೀಳದೇ ಇರಲಿಲ್ಲ. "ಹೌದು! ಹುಲಿಯದ್ದೇ ಹೆಜ್ಜೆ!" ಮುಖದಲ್ಲಿ ಯಾವ ಭಾವನೆಯನ್ನೂ ತೋರದೆ, "ಬನ್ನಿ ಮಕ್ಕಳೇ ಹೊತ್ತಾಯಿತು ಹೋಗಣ" ಎಂದು ನಮ್ಮನ್ನು ಮುನ್ನೆಡಿಸಿದರು.  ಯಾರೊಬ್ಬರೂ ಮಾತಾಡಲಿಲ್ಲ. ಎಲ್ಲರಿಗೂ 'ಅಂಬಿಯ' ಕಥೆ ಏನಾಯಿತು ಎಂಬುದು ತಿಳಿದಿತ್ತು. ಸಧ್ಯದ ನಮ್ಮ ಪರಿಸ್ಥಿತಿಯಲ್ಲಿ 'ಅಂಬಿಯ' ಗತಿ ನಮಗೂ ಆಗಬಾರದೆಂಬುದೇ ನಮ್ಮೆಲ್ಲರ ಮನೋಕಾಮನೆಗಳಾಗ